`ಯಕ್ಷಗಾನ ತರಬೇತಿಯಿಂದ ಉನ್ನತಿ`
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಆಗಸ್ಟ್ 10 , 2013
|
ಕಾರ್ಕಳ , ಆಗಸ್ಟ್ 10 , 2013
|
`ಯಕ್ಷಗಾನ ತರಬೇತಿಯಿಂದ ಉನ್ನತಿ'
ಕಾರ್ಕಳ :
ಯಕ್ಷಗಾನದ ವಿವಿಧ ತರಬೇತಿಯನ್ನು ಪಡೆಯುವ ಮೂಲಕ ಅದನ್ನು ಮೈಗೂಡಿಸಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ಇತರ ರಂಗಗಳಲ್ಲೂ ಉನ್ನತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಯಕ್ಷ ಕಲಾರಂಗದ ಸ್ಥಾಪಕ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಬಿ. ಪದ್ಮನಾಭ ಗೌಡ ಇಲ್ಲಿ ತಿಳಿಸಿದರು.
ಇಲ್ಲಿನ ಗುಂಡ್ಯಡ್ಕದಲ್ಲಿರುವ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಇತ್ತೀಚೆಗೆ ಯಕ್ಷ ಕಲಾರಂಗ ಮತ್ತು ವಿಕಾಸ ಸೇವಾ ಸಂಸ್ಥೆಗಳ ವತಿಯಿಂದ ಯಕ್ಷಗಾನ ನೃತ್ಯ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಯಕ್ಷ ಕಲಾರಂಗದ ಸ್ಥಾಪನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಶಾಸಕ ವಿ. ಸುನಿಲ್ ಕುಮಾರ್ ತರಬೇತಿಯನ್ನು ಉದ್ಫಾಟಿಸಿ ಮಾತನಾಡಿ, ಯಕ್ಷಗಾನ ಕಲೆಯು ಶ್ರೇಷ್ಠ ಕಲೆಯಾಗಿದ್ದು ಯುವ ಜನರು ಈ ಕಲಾ ಪ್ರಕಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಯಕ್ಷ ಕಲಾರಂಗದ ಕಾರ್ಯದರ್ಶಿ ಹಾಗೂ ಯಕ್ಷಗುರು ಮಹಾವೀರ ಪಾಂಡಿ ಮಾತನಾಡಿ, ಯಕ್ಷಗಾನ ಒಂದು ಆರಾಧನಾ ಕಲೆ. ಇದನ್ನು ಕಲಿತು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶ್ರೀವರ್ಮ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕೇಂದ್ರದ ನಿರ್ದೇಶಕ ಕೃಷ್ಣ ಭಟ್ ಸ್ವಾಗತಿಸಿದ ರು. ವಾಣಿಜ್ಯಶಾಸ್ತ್ರ ಸಹಪ್ರಾಧ್ಯಾಪಕಿ ಜ್ಯೋತಿ ಎಲ್.ಜೆ.ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ಪ್ರಮೋದ್ ಆಚಾರ್ಯ ವಂದಿಸಿದರು.
|
|
|